ನಂದಿತೀರ್ಥದಲ್ಲಿ `ಕಿಸ್ಮತ್` ಚಿತ್ರಕ್ಕೆ ಚಾಲನೆ
Posted date: 18 Mon, Nov 2013 – 10:19:06 PM

ನಟ ವಿಜಯರಾಘವೇಂದ್ರ ನಾಯಕರಾಗಿ ನಟಿ ನಿರ್ದೇಶಿಸುತ್ತಿರುವ ‘ಕಿಸ್ಮತ್‘ ಚಿತ್ರ ಕಳೆದವಾರ ಮಲ್ಲೇಶ್ವರಂನ ನಂದಿತೀರ್ಥದಲ್ಲಿ ಆರಂಭವಾಯಿತು. ಪ್ರಥಮ ಸನ್ನಿವೇಶಕ್ಕೆ ವಿಜಯರಾಘವೇಂದ್ರರ ತಂದೆ ಚಿನ್ನೇಗೌಡ ಅವರು ಆರಂಭಫಲಕ ತೋರಿದರೆ ಸೆಂಚುರಿಸ್ಟಾರ್ ಶಿವರಾಜಕುಮಾರ್ ಕ್ಯಾಮೆರಾಚಾಲನೆ ಮಾಡಿದರು. ಪವರ್‌ಸ್ಟಾರ್ ಪುನೀತ್‌ರಾಜಕುಮಾರ್, ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಂ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎಚ್.ಡಿ.ಗಂಗರಾಜ್ ಮುಂತಾದ ಗಣ್ಯರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಶುಭಕೋರಿದರು.
    ರಾಜೇಶ್‌ಮುರುಗೇಶನ್ ಸಂಗೀತ ನಿರ್ದೇಶನದ ‘ಕಿಸ್ಮತ್‘ಗೆ ರಾಜೇಶ್‌ಯಾದವ್ ಅವರ ಛಾಯಾಗ್ರಹಣವಿದೆ. ದೀಪು.ಎಸ್.ಕುಮಾರ್ ಸಂಕಲನ, ರವಿವರ್ಮ ಸಾಹಸ ನಿರ್ದೇಶನ, ಹರ್ಷ ನೃತ್ಯ ನಿರ್ದೇಶನ, ಮೋಹನ್ ಪಂಡಿತ್ ಕಲಾ ನಿರ್ದೇಶನವಿರುವ ಈ ಚಿತ್ರಕ್ಕೆ ನವೀನ್‌ಕೃಷ್ಣ ಸಂಭಾಷಣೆ ಬರೆದಿದ್ದಾರೆ. ಆನಂದಪ್ರಿಯ ಗೀತರಚನೆ ಮಾಡಿದ್ದಾರೆ.
   ವಿಜಯರಾಘವೇಂದ್ರ, ನವೀನ್‌ಕೃಷ್ಣ, ದಿಲೀಪ್‌ರಾಜ್, ನಂದ, ತಬಲನಾಣಿ ಮುಂತಾದವರ ತಾರಾಬಳಗವಿರುವ ಈ ಚಿತ್ರದ ವಿಶೇಷ ಪಾತ್ರದಲ್ಲಿ  ಸಾಯಿಕುಮಾರ್ ಅಭಿನಯಿಸುತ್ತಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed